ನೆನಪಿನ ಪಯಣ-04
ಯೂನಿವರ್ಸಿಟಿ ಕಾಲೇಜ್ ಎಂದಾಗ ನೆನಪಾಗೋದು ನಾನಲ್ಲಿ ಇನ್ ಕಂ ಸರ್ಟಿಫಿಕೇಟ್ ಪ್ರಸ್ತುತಪಡಿಸಿ ಫೀಸಿನಲ್ಲಿ ರಿಯಾಯಿತಿ ಪಡೆದು ಕಲ್ತದ್ದು, ನನ್ನ ಜೊತೆಗಿದ್ದ ತುಂಬ ಮಂದಿ ಸ್ನೇಹಿತರೂ ಇದೇ ಥರ ಆದಾಯ ದೃಢೀಕರಣ ಪತ್ರ ಸಲ್ಲಿಸಿ ಫೀಸಿನಲ್ಲಿ ರಿಯಾಯಿತಿ ಪಡೆದು ಕಲಿತಿದ್ದೇವೆ. ಬಹುಷಹ ಆ ಹೊತ್ತಿಗೆ ನನಗೆ ಹಾಗೂ ನನ್ನ ಸ್ನೇಹಿತರಿಗೆ ಮಂಗಳೂರಿನ ದೊಡ್ಡ ದೊಡ್ಡ ಖಾಸಗಿ ಕಾಲೇಜಿನ ಫೀಸು ಕಟ್ಟಿ ಕಲಿಯುವಷ್ಟು ಆರ್ಥಿಕ ಶಕ್ತಿ ಇರಲಿಲ್ಲ. ಹಾಗಾಗಿ ನನ್ನಂತಹ ಎಷ್ಟೋ ಸಾವಿರ ಮಂದಿಗೆ ಈ ಕಾಲೇಜು ಕಲಿಯಲು ಅವಕಾಶ ಕೊಟ್ಟಿದೆಯೇನೋ ಎಂದು ನೆನಸಿದಾಗ ಧನ್ಯತೆ ಮೂಡುತ್ತದೆ. ಈ ಸಂಸ್ಥೆ ಯಾರಿಗೂ ಅವಕಾಶ ನಿರಾಕರಣೆ ಮಾಡುವುದಿಲ್ಲ. ಬೇರೆ ಬೆರೆ ಮೀಸಲುಗಳು, ಆರ್ಥಿಕ ರಿಯಾಯಿತಿ ಮೂಲಕ ನಮ್ಮಂಥ ಅದೆಷ್ಟೋ ಮಂದಿಗೆ ಡಿಗ್ರಿ ಪಡೆಯುವ ಕನಸು ನನಸು ಮಾಡಿದೆ.
ಭಾಷೆಯ ವಿಷಯದಲ್ಲೂ ಅಷ್ಟೇ ಪಿಯುಸಿ ತನಕ ಕನ್ಡಡ, ತುಳು ಮಾತನಾಡಿಕೊಂಡು ಬೆಳೆದ ನಮಗೆ ಪೇಟೆಯ ಕಾಲೇಜಿಗೆ ಬಂದಾಗ ಎಷ್ಟು ಕಷ್ಟವಾಗಬಹುದೋ ಎಂಬ ಆತಂಕ ಇತ್ತು. ಆದರೆ, ಅಲ್ಲಿನ ಸ್ಟಾಫ್ ನಮ್ಮೊಂದಿಗೆ ಇರುತ್ತಿದ್ದ ರೀತಿ ಯಾವತ್ತೂ ನಮಗೆ ಪರಕೀಯ ಭಾವನೆ ಮೂಡಿಸಲಿಲ್ಲ. ತುಂಬ ಬೇಗೆ ನಾವಲ್ಲಿಗೆ ಹೊಂದಿಕೊಂಡು ಬಿಟ್ಟೆವು. ಅವರಾಗಿ ಕೊಡುತ್ತಿದ್ದ ನೋಟ್ಸ್, ಸಿಂಪಲ್ ಇಂಗ್ಲಿಷ್ ಬಳಕೆ ಇದ್ಯಾದಿ ಇತ್ಯಾದಿ... ಅಲ್ಲೊಂದು ಚಂದದ ಲೈಬ್ರೆರಿ ಇತ್ತು, ರೀಡಿಂಗ್ ರೂಂ ಇತ್ತು, ಲ್ಯಾಬ್ ಇತ್ತು, ವಾಲ್ ಮ್ಯಾಗಝೀನ್ ಇತ್ತು. ನಾವೆಲ್ಲ ಅದನ್ನು ಎಷ್ಟು ಬಳಸಿಕೊಂಡಿದ್ದೇವೆ ಎಂಬುದು ಅವರವರ ಆಸಕ್ತಿಗೆ ಬಿಟ್ಟದ್ದು ಅಷ್ಟೆ...
ಇಷ್ಟು ವರ್ಷಗಳ ಬಳಿಕ ಸ್ವಂತ ಕಾಲಿನಲ್ಲಿ ನಿಂತು ದುಡಿಯುವ ಹೊತ್ತಿಗೆ ಆಗಿನ ಪರಿಸ್ಥಿತಿಯ ತೀವ್ರತೆ ಈಗ ಬಾಧಿಸುವುದಿಲ್ಲ. ಆದರೆ, ನಾವು ದಾಟಿ ಬಂದ ಆ ದಿನಗಳು ಬಹುಷಹ ಇಂದು ಕಲಿಯುವ ವಿದ್ಯಾರ್ಥಿಗಳನ್ನೂ ಬಾಧಿಸುತ್ತಿರಬಹುದು. ಈಗಂತೂ ಪ್ರಪಂಚ ದುಬಾರಿಯಾಗಿದೆ. ಆಗ ನಮಗೆ ಕೆಎಂಸಿ ಕ್ಯಾಂಟೀನಿನಲ್ಲಿ 5 ರುಪಾಯಿಗೆ ಊಟ ಸಿಗುತ್ತಿತ್ತು (ನನಗೆ ಸರಿ ನೆನಪಿದೆ). ಗೀತ ಮಹಲ್ ಹೋಟೇಲಿನಲ್ಲಿ 4 ರುಪಾಯಿಗೆ ಪರೋಟಾ ಸಿಗುತ್ತಿತ್ತು. 25 ಕಿ.ಮೀ. ದೂರದ ನನ್ನೂರಿಗೆ ಸಿ ಟಿಕೆಟಿಗೆ ಕೇವಲ 3 ರುಪಾಯಿ ಇತ್ತು. ಈಗ ಪ್ರಪಂಚ ಎಷ್ಟು ದುಬಾರಿಯಾಗಿದೆ ಎಂಬುದು ನಿಮಗೆ ಗೊತ್ತೇ ಇದೆ.
ಈಗಿನ ಪ್ರಾಂಶುಪಾಲರಾದ ಉದಯಕುಮಾರ್ ಇರ್ವತ್ತೂರು ಅವರು ಅಲ್ಲಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಕಿಕೊಂಡಿದ್ದಾರೆ. ಅದೀದಾಗಲೇ ಜಾರಿಯಲ್ಲಿದೆ. ಹಸಿದ ಬಡ ವಿದ್ಯಾರ್ಥಿಗಳಿಗೆ ಊಟ ಒದಗಿಸುವುದು ಪುಣ್ಯದ ಕಾರ್ಯ. ನಮ್ಮಲ್ಲಿ ಬಹುತೇಕ ಮಂದಿ ಈಗ ದುಡಿಯುತ್ತಿದ್ದೇವೆ. ಹಾಗಾಗಿ ನಮ್ಮ ಗ್ರೂಪ್ ಇನ್ನಷ್ಟು ಪ್ರಬುದ್ಧವಾದ ಬಳಿಕ ದಯವಿಟ್ಟು ನಾವೆಲ್ಲ ಸೇರಿ ಕೈಲಾದಷ್ಟು ದುಡ್ಡು ಸೇರಿಸಿ ನಮ್ಮ ಗ್ರೂಪಿನ ವತಿಯಿಂದ ಕಾಲೇಜಿನ ಬಿಸಿಯೂಟ ಯೋಜನೆಯಲ್ಲಿ ಕೈಜೋಡಿಸುವ. ಏನಂತೀರಿ...
-ಕೆಎಂ.
ಯೂನಿವರ್ಸಿಟಿ ಕಾಲೇಜ್ ಎಂದಾಗ ನೆನಪಾಗೋದು ನಾನಲ್ಲಿ ಇನ್ ಕಂ ಸರ್ಟಿಫಿಕೇಟ್ ಪ್ರಸ್ತುತಪಡಿಸಿ ಫೀಸಿನಲ್ಲಿ ರಿಯಾಯಿತಿ ಪಡೆದು ಕಲ್ತದ್ದು, ನನ್ನ ಜೊತೆಗಿದ್ದ ತುಂಬ ಮಂದಿ ಸ್ನೇಹಿತರೂ ಇದೇ ಥರ ಆದಾಯ ದೃಢೀಕರಣ ಪತ್ರ ಸಲ್ಲಿಸಿ ಫೀಸಿನಲ್ಲಿ ರಿಯಾಯಿತಿ ಪಡೆದು ಕಲಿತಿದ್ದೇವೆ. ಬಹುಷಹ ಆ ಹೊತ್ತಿಗೆ ನನಗೆ ಹಾಗೂ ನನ್ನ ಸ್ನೇಹಿತರಿಗೆ ಮಂಗಳೂರಿನ ದೊಡ್ಡ ದೊಡ್ಡ ಖಾಸಗಿ ಕಾಲೇಜಿನ ಫೀಸು ಕಟ್ಟಿ ಕಲಿಯುವಷ್ಟು ಆರ್ಥಿಕ ಶಕ್ತಿ ಇರಲಿಲ್ಲ. ಹಾಗಾಗಿ ನನ್ನಂತಹ ಎಷ್ಟೋ ಸಾವಿರ ಮಂದಿಗೆ ಈ ಕಾಲೇಜು ಕಲಿಯಲು ಅವಕಾಶ ಕೊಟ್ಟಿದೆಯೇನೋ ಎಂದು ನೆನಸಿದಾಗ ಧನ್ಯತೆ ಮೂಡುತ್ತದೆ. ಈ ಸಂಸ್ಥೆ ಯಾರಿಗೂ ಅವಕಾಶ ನಿರಾಕರಣೆ ಮಾಡುವುದಿಲ್ಲ. ಬೇರೆ ಬೆರೆ ಮೀಸಲುಗಳು, ಆರ್ಥಿಕ ರಿಯಾಯಿತಿ ಮೂಲಕ ನಮ್ಮಂಥ ಅದೆಷ್ಟೋ ಮಂದಿಗೆ ಡಿಗ್ರಿ ಪಡೆಯುವ ಕನಸು ನನಸು ಮಾಡಿದೆ.
ಭಾಷೆಯ ವಿಷಯದಲ್ಲೂ ಅಷ್ಟೇ ಪಿಯುಸಿ ತನಕ ಕನ್ಡಡ, ತುಳು ಮಾತನಾಡಿಕೊಂಡು ಬೆಳೆದ ನಮಗೆ ಪೇಟೆಯ ಕಾಲೇಜಿಗೆ ಬಂದಾಗ ಎಷ್ಟು ಕಷ್ಟವಾಗಬಹುದೋ ಎಂಬ ಆತಂಕ ಇತ್ತು. ಆದರೆ, ಅಲ್ಲಿನ ಸ್ಟಾಫ್ ನಮ್ಮೊಂದಿಗೆ ಇರುತ್ತಿದ್ದ ರೀತಿ ಯಾವತ್ತೂ ನಮಗೆ ಪರಕೀಯ ಭಾವನೆ ಮೂಡಿಸಲಿಲ್ಲ. ತುಂಬ ಬೇಗೆ ನಾವಲ್ಲಿಗೆ ಹೊಂದಿಕೊಂಡು ಬಿಟ್ಟೆವು. ಅವರಾಗಿ ಕೊಡುತ್ತಿದ್ದ ನೋಟ್ಸ್, ಸಿಂಪಲ್ ಇಂಗ್ಲಿಷ್ ಬಳಕೆ ಇದ್ಯಾದಿ ಇತ್ಯಾದಿ... ಅಲ್ಲೊಂದು ಚಂದದ ಲೈಬ್ರೆರಿ ಇತ್ತು, ರೀಡಿಂಗ್ ರೂಂ ಇತ್ತು, ಲ್ಯಾಬ್ ಇತ್ತು, ವಾಲ್ ಮ್ಯಾಗಝೀನ್ ಇತ್ತು. ನಾವೆಲ್ಲ ಅದನ್ನು ಎಷ್ಟು ಬಳಸಿಕೊಂಡಿದ್ದೇವೆ ಎಂಬುದು ಅವರವರ ಆಸಕ್ತಿಗೆ ಬಿಟ್ಟದ್ದು ಅಷ್ಟೆ...
ಇಷ್ಟು ವರ್ಷಗಳ ಬಳಿಕ ಸ್ವಂತ ಕಾಲಿನಲ್ಲಿ ನಿಂತು ದುಡಿಯುವ ಹೊತ್ತಿಗೆ ಆಗಿನ ಪರಿಸ್ಥಿತಿಯ ತೀವ್ರತೆ ಈಗ ಬಾಧಿಸುವುದಿಲ್ಲ. ಆದರೆ, ನಾವು ದಾಟಿ ಬಂದ ಆ ದಿನಗಳು ಬಹುಷಹ ಇಂದು ಕಲಿಯುವ ವಿದ್ಯಾರ್ಥಿಗಳನ್ನೂ ಬಾಧಿಸುತ್ತಿರಬಹುದು. ಈಗಂತೂ ಪ್ರಪಂಚ ದುಬಾರಿಯಾಗಿದೆ. ಆಗ ನಮಗೆ ಕೆಎಂಸಿ ಕ್ಯಾಂಟೀನಿನಲ್ಲಿ 5 ರುಪಾಯಿಗೆ ಊಟ ಸಿಗುತ್ತಿತ್ತು (ನನಗೆ ಸರಿ ನೆನಪಿದೆ). ಗೀತ ಮಹಲ್ ಹೋಟೇಲಿನಲ್ಲಿ 4 ರುಪಾಯಿಗೆ ಪರೋಟಾ ಸಿಗುತ್ತಿತ್ತು. 25 ಕಿ.ಮೀ. ದೂರದ ನನ್ನೂರಿಗೆ ಸಿ ಟಿಕೆಟಿಗೆ ಕೇವಲ 3 ರುಪಾಯಿ ಇತ್ತು. ಈಗ ಪ್ರಪಂಚ ಎಷ್ಟು ದುಬಾರಿಯಾಗಿದೆ ಎಂಬುದು ನಿಮಗೆ ಗೊತ್ತೇ ಇದೆ.
ಈಗಿನ ಪ್ರಾಂಶುಪಾಲರಾದ ಉದಯಕುಮಾರ್ ಇರ್ವತ್ತೂರು ಅವರು ಅಲ್ಲಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಕಿಕೊಂಡಿದ್ದಾರೆ. ಅದೀದಾಗಲೇ ಜಾರಿಯಲ್ಲಿದೆ. ಹಸಿದ ಬಡ ವಿದ್ಯಾರ್ಥಿಗಳಿಗೆ ಊಟ ಒದಗಿಸುವುದು ಪುಣ್ಯದ ಕಾರ್ಯ. ನಮ್ಮಲ್ಲಿ ಬಹುತೇಕ ಮಂದಿ ಈಗ ದುಡಿಯುತ್ತಿದ್ದೇವೆ. ಹಾಗಾಗಿ ನಮ್ಮ ಗ್ರೂಪ್ ಇನ್ನಷ್ಟು ಪ್ರಬುದ್ಧವಾದ ಬಳಿಕ ದಯವಿಟ್ಟು ನಾವೆಲ್ಲ ಸೇರಿ ಕೈಲಾದಷ್ಟು ದುಡ್ಡು ಸೇರಿಸಿ ನಮ್ಮ ಗ್ರೂಪಿನ ವತಿಯಿಂದ ಕಾಲೇಜಿನ ಬಿಸಿಯೂಟ ಯೋಜನೆಯಲ್ಲಿ ಕೈಜೋಡಿಸುವ. ಏನಂತೀರಿ...
-ಕೆಎಂ.
0 Comments