Ticker

5/recent/ticker-posts

Header Ads Widget

MANGALORE UNIVERSITY

ಕೆ.ಎಮ್.ನೀವು ಒಬ್ಬ ಯೋಗಿ

 



ಕೆ.ಎಮ್.ನೀವು ಒಬ್ಬ ಯೋಗಿ ಎಂದರೆ ತಪ್ಪಾಗಲಿಕ್ಕಿಲ್ಲ.ನಿಮ್ಮಂತಹ ಒಬ್ಬ ನಾಯಕನನ್ನು ಪಡೆದ ನಾವು ನಿಜವಾಗಲೂ ಧನ್ಯರು.ನಿಮ್ಮ ಬಗ್ಗೆ ನಾನು ತುಂಬಾ ಸಲ ಬರೆಯಬೇಕೆಂದಿದ್ದೆ ಆದರೆ ನನಗೆ ಸಮಯ ಇರಲಿಲ್ಲ ಇವತ್ತು ಇಲ್ಲ ಆದರೂ ನನಗೆ ಅನಿಸಿದನ್ನು ಇಲ್ಲಿ ಬರೆಯುತ್ತೇನೆ.ನೀವು ಇಲ್ಲಿ ಪ್ರವಾಸಕ್ಕೆ ಆರಿಸಿದ ಸ್ಥಳವಿರಬಹುದು,ವಾಹನವಿರಬಹುದು ,ಊಟದ ವ್ಯವಸ್ಥೆಯಾಗಲಿ ಯಾವುದನ್ನು ನೀವು ಆರಿಸುವಿರೋ ಅದನ್ನು ಚಾಚು ತಪ್ಪದೆ ಪಾಲಿಸುವ ಉತ್ತಮ ಗೆಳೆಯರ ಬಳಗ ನಮ್ಮದು.


ನೀವು ಅಂತಹ ಮಹಾನ್ ನಾಯಕ.ಒಂದು ಪ್ರವಾಸವನ್ನು ಆಯೋಜಿಸಬೇಕೆಂದರೆ ಅದರ ಹಿಂದಿರುವ ಕಷ್ಟ ಅದನ್ನು ಆರಿಸಿದವನಿಗೆ ಗೊತ್ತು ಪ್ರವಾಸಕ್ಕೆ ಬರುವ ವ್ಯಕ್ತಿ ಗಳಿಂದ ಹಿಡಿದು ಅದಕ್ಕೆ ಸಂಬಂದಪಟ್ಟ ವಾಹನ ,ಅಲ್ಲಿನ ಪರಿಸರ,ಊಟದ ವ್ಯವಸ್ಥೆ,ಕುಡಿಯುವ ನೀರು,ವಾಶ್ರೂಮ್,ಪ್ರಯಾಣ ಮಾಡುವವರ ಆರೋಗ್ಯ ಒಂದೋ ಎರಡೋ ಎಲ್ಲದರ ಬಗ್ಗೆ ಕಾಳಜಿ ವಹಿಸಿ ಎಲ್ಲರಿಗೂ ಒಪ್ಪಿಗೆ ಆಗುವ ದಿನಾಂಕ ವನ್ನು ನಿಗದಿಪಡಿಸಬೇಕಾದರೆ ಅದು ಹಿಮಾಲಯವನ್ನೆ ಹತ್ತಿ ಇಳಿದಂತೆ.ಕೆ.ಎಮ್ ಪಾಪ ಪ್ರವಾಸ ಆರಂಭ ಮಾಡುವ ದಿನದಿಂದ ಹೊರಡುವ ದಿನಾಂಕದ ತನಕ ಸರಿಯಾಗಿ ಊಟ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ ಆದರೂ ತಾನು ಕೈ ಗೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಇನ್ನು ಉತ್ತಮವಾಗಿ ಮಾಡಿಮುಗಿಸಿದ್ದಾರೆ.ಇದರ ಹಿಂದೆ ಇರುವ ಅವರ ಪರಿಶ್ರಮ, ತಪಸ್ಸು ಎಂತದಿರಬಹುದು.ತನ್ನ ಕೆಲಸದ ನಡುವೆ ಬಸ್ಸನ್ನು ಬುಕ್ ಮಾಡುವುದು ಅದಕ್ಕೆ ಅಡ್ವಾನ್ಸ್ ನೀಡಲು ಹೋಗುವುದು ಎಲ್ಲವು ಕೆಲಸದ ಮದ್ಯದಲ್ಲಿ ಅಥವಾ ವಿಶ್ರಾಂತಿ ಯ ಸಮಯದಲ್ಲಾಗಿರಬಹುದು.ಈ ಎಲ್ಲ ಪರಿಶ್ರಮ ಪಟ್ಟರೂ ಪ್ರವಾಸವು ಯಾರು ಎಣಿಸದಷ್ಟು ಅತ್ಯುತ್ತಮ ವಾಗಿ ಮೂಡಿಬಂದಿದೆ 


ನಾವು ಇನ್ನು ಕಾಲೇಜಿನಲ್ಲೆ ಇದ್ದೇವೆ ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ ಹೊರಡುವಾಗ ಮಾತ್ರ ಮನೆಯ ನೆನಪಾಗಿರಬಹುದು ಅಂತಹ ಒಂದು ಶಕ್ತಿ ಈ ಗೆಳೆತನಕ್ಕಿದೆ ಹಾಗೂ ಕೆ.ಎಮ್ ರಂತಹ ಒಬ್ಬ ಉತ್ತಮ ನಾಯಕನಿಂದ ಮಾತ್ರ ಸಾದ್ಯ.ಬಸ್ಸಿನಲ್ಲಿ ಮಾಡಿದ ಡ್ಯಾನ್ಸ್ ತುಂಬಾ ಚೆನ್ನಾಗಿತ್ತು ಅದನ್ನು ನೋಡುವಾಗ ನಾವೆಲ್ಲ 40 ಅಲ್ಲ 20 ವಯಸ್ಸಿನಲ್ಲಿಯೆ ಇದ್ದೆವೆ ಎಂಬ ಭಾವನೆ ಮೂಡಿದ್ದಂತು ಸತ್ಯ ನಮಗೆ ಆ ಅವಕಾಶ ಸಿಕ್ಕಿಲ್ಲ.ಇದೆಲ್ಲ ಸಾಧ್ಯವಾಗಿದ್ದು ಕೆ.ಎಮ್ ರವರ ಮುತುವರ್ಜಿಯಿಂದ. ಅವರು ತೆಗೆದುಕೊಳ್ಳುವ .ಅವರು ಹೇಳಿದ ಮಾತು 15 ದಿನ ಗ್ರೂಪ್ನಿಂದ ದೂರ ಉಳಿಯುವ ಮಾತು ಅದು ಅವರ ಸ್ವಂತ ವಿಚಾರವಾಗಿಬಹುದು ಆದರೂ ಕೊನೆಯಲ್ಲಿ ಅವರು ಪ್ರವಾಸದಲ್ಲಿ ಪಟ್ಟ ಆನಂದದಿಂದ ತನ್ನ ಗೆಳೆಯ ಗೆಳತಿಯರ ಸಂತೋಷ ದ ಮುಂದೆ ಅವರ ನಿರ್ದಾರ ಬದಲಿಸಬಹುದು.ಆದರೂ ಅವರಿಗೆ ದೇವರು ತುಂಬಾ ಶಕ್ತಿಯನ್ನು ನೀಡಿದ್ದಾರೆ .ನನ್ನ ಬಳಿ ಮಾತನಾಡುವಾಗಲು ನನಗೆ ಬರಲಾಗದಿದ್ದದಕ್ಕೆ ಕೊನೆ ಕ್ಷಣದಲ್ಲಿ ಪೋನ್ ಮಾಡಿ ವಿಚಾರಿಸಿ ನನಗೆ ಧೈರ್ಯ ನೀಡಿದ್ದಾರೆ ಮುಂದೆ ನೋಡುವ ಎಂಬ ಮಾತು ಅದು ಎಂತಹ ವಿನಯತೆ ಯಾವುದೇ ಕೋಪ ವಾಗಲಿ ಬೇಸರವಾಗಲಿ ಕೊನೆ ಕ್ಷಣದಲ್ಲಿ ಕೈ ಕೊಟ್ಟರೆಂಬ ಅಸಹನೆ ಯಾವುದು ಇಲ್ಲ ಒಂದೇ ಮಾತು ನಿಮ್ಮ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ ಮುಂದಿನ ಬಾರಿನೋಡುವ.ಇಂತಹ ಗೆಳೆಯನನ್ನು ಪಡೆದ ನಾವು ನಿಜಕ್ಕೂ ಧನ್ಯರು.


ಅದೇ ರೀತಿ ಕೆ.ಎಮ್ ಗೆ ಬಲಗೈ ಬಂಟರಂತೆ ಯಾವುದೆ ಕೆಲಸವನ್ನು ಯಶಸ್ವಿ ಮಾಡಲು ಸುಶೀಲ್,ನಿತಿನ್ ಸದಾ ಜೊತೆಗಿರುತ್ತಾರೆ ,ಅವರಿಗೆ ಮಾರ್ಗದರ್ಶನ ಮಾಡುವ ಫಾರೂಕ್     ಇಂತಹ ಒಂದು ಗೆಳೆಯರ ಬಳಗ ನಮ್ಮದು.ಎಲ್ಲರೂ ನಮ್ಮವರೆ ಇಲ್ಲಿ ಮೂವರ ಹೆಸರು ಮಾತ್ರ ಹೇಳಿದೆ ನಾವೆಲ್ಲ ವಾನರ ಸೇನೆಯಂತೆ ನಮ್ಮ ಕಿಂಚಿತ್ ಸಹಕಾರವನ್ನು ನೀಡಿ ಎಲ್ಲವನ್ನು ಯಶಸ್ವಿ ಮಾಡುತ್ತೇವೆ.ಈ ಒಗ್ಗಟ್ಟು ಇದೇ ರೀತಿ ನಮ್ಮಲ್ಲಿ ಇರಲಿ.ಯಾವಾಗಲೂ ಒಟ್ಟಾಗಿರುವ .ಕೆ.ಎಮ್ ನಾಯಕತ್ವ ಕ್ಕೆ ಸದಾ ಬೆನ್ನೆಲುಬಾಗಿರುವ.


ಬರಹ : : ಗಣೇಶ ಕಾಮತ್ 

Post a Comment

0 Comments